ಉತ್ತರಾಖಂಡದ ಮಳೆ
ಉತ್ತರಾಖಂಡದಲಿ ಕೊಚ್ಚಿ ಹೋದ ಅಮೂಲ್ಯ ಪ್ರಾಣಗಳೇ
ನಿಮಗೆನ್ನ ಕಂಬನಿಯ ಶೃದ್ದಾಂಜಲಿ
ಬಂದೆವು ನಾಳೆ ಎಂದು ಹೊರಟು ಮಳೆ,ಪ್ರವಾಹದಲಿ ಸಿಲುಕಿ
ಅತ್ಮವನ್ನಷ್ಟೇ ಮನೆ ಕಳುಹಿಸಿ ಹೊರಟಿರಾ ?
ಉಳಿದ ಗೆಳಯರೇ ಮನೆ ಮನೆಯಲ್ಲೂ ಬೇಡಿಕೆಯ ದೀಪ ದೇವರೆದುರು
ಕಾತರದ ಅಮ್ಮಂದಿರು ,ಮನೆಯವರು ಬೇಗ ಬನ್ನಿ ,
ಉತ್ತರಾಕಾಂಡದಲಿ ನಡೆದದ್ದು ದೂರದರ್ಶನ ಬಿತ್ತರಿಸುವಾಗ ,
ನಿಮ್ಮ ದನಿ ದೂರ ವಾಣಿಯಲ್ಲಿ ಕೇಳಿ ನಿಟ್ಟುಸಿರು .
ಬದುಕು ಕಷ್ಟ ಪ್ರಕೃತಿ ತಿರುಗಿ ಬಿದ್ದಾಗ ,ಭೂಮಿಯೇ ಕೈ ಬಿಡೆ ಹೇಗೆ?
ಎದೆಯಲ್ಲಿ ಗಟ್ಟಿ ದೈರ್ಯದ ಉತ್ಸಾಹ ತುಂಬಿ ವಯಸ್ಸಾದವರ ಹೊತ್ತು ಬಂದು ಬಿಡಿ
ಕೋಟಿ ಹೃದಯಗಳ ಪ್ರಾರ್ಥನೆ ನಿಮ್ಮೊಂದಿಗಿದೆ ,ಬಲವಿದೆ
ಮಳೆ ಗಾಳಿ ಚಳಿ ಪ್ರವಾಹ ನಷ್ಟ ಕಷ್ಟ ಮೀರಿ ತಲುಪಿ ನಿಮ್ಮ ಮನೆಗೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ