ಮಂಗಳವಾರ, ಜೂನ್ 25, 2013
ರವಿಬೆಳಗೆರೆಯವರ ''ಅಮ್ಮ ಸಿಕ್ಕಿದ್ಲು ''ಭಾವನಾ ಪ್ರಕಾಶನದ ಅಪರೂಪದ ಅಮ್ಮನನ್ನು ನೆನೆವ ಕುಡುಕ ಮಗನ ಹಂಬಲಿಕೆಯ ಕಥೆ ,ಕುಡಿತದ ವ್ಯಸನಕ್ಕೆ ಸಿಕ್ಕ ನಾಯಕ ತಾಯಿಯೊಂದಿಗಿನ ಒಂದು ದಿನಕ್ಕಾಗಿ ಹಂಬಲಿಸುವುದು ಹೃದಯಪೂರ್ಣ ,ಅಮ್ಮ ಕಳೆದ ಒಂದು ದಿನದ ಸಾಂಗತ್ಯ ಅವನ ಜೀವನದ ಅಮೂಲ್ಯ ದಿನ, ಅಮ್ಮ ಸಿಗಬೇಕೆ ಮತ್ತೆ ?ಅವಳು ಸಾಕಿದ ಆದರ್ಶದ ಜೀವನವನ್ನ ಕುಡಿತದಲ್ಲಿ ಮುಳುಗಿಸಿ ಏಳಲಾರದ ಅತೀ ಬುದ್ದಿವಂತ ,ಭಾವುಕ ಮಗ ಹೀಗೆ .....,ಸ್ಲಂ ನಲ್ಲಿ ಮನೆಮಾಡಬೇಕಾದಾಗಲೂ ,ನೌಕರಿ ,ಗೌರವ ,ನೆಲದ ಪಾಲಾದಾಗಲೂ ಮನಸ್ಸಿನ ಗೊಂದಲಕ್ಕೆ ಸಿಗದೇ ಕುಡಿದು ನಿರಾಳವಾಗುವ ವ್ಯಕ್ತಿತ್ವ ,ಇದೇನಾ ಅಮ್ಮ ರೂಪಿಸ ಹೊರಟ ವ್ಯಕ್ತಿತ್ವ ?ಯಾಕೆ ಹೀಗಾಯಿತು ಎನ್ನುವ ತಳಮಳ ಓದುಗನಲ್ಲಿ ?. ಒಬಳಮ್ಮನ ಸಿಂಗಾರ ಸಾವಿನತ್ತ್ತ ಸಾಗುವಾಗಲೂ ಎದೆಬಡಿತ ಹೆಚ್ಚಿಸುವ ಬದುಕಿನಾಸಕ್ತಿ ,ರಾಧಮ್ಮನ ಸುoದರ ಸಾವಿನ ಹೆಣ್ತನದ ಬಯಕೆ,ಉಬ್ಬಿಸಿ ಮಗನನ್ನು ಕೋಳಿ ಕಾಳಗದಂತೆ ಹಣಕ್ಕಾಗಿ ಬಳಸುವ ಅಪ್ಪ ,ಅವನ ಶಬ್ಬಾಸುಗಿರಿಯ ಕೃತಿಮತೆ ತಿಳಿವಿಗೆ ಬಂದಾಗ ಅಮ್ಮನ ಬಗ್ಗೆ ಕಣ್ಣೀ ರು. ರವಿಜೀಯವರ ಬದುಕುವ ಪ್ರೇರಣೆ ಅಮ್ಮ ನ ನೆನಪು ಮರೆಯಲಾಗದ ಪುಸ್ತಕವನ್ನ ಕೊಟ್ಟಿದೆ,
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ