ಶನಿವಾರ, ಜೂನ್ 22, 2013

ದೇಹ ದೇಗುಲ
ಮೂಲಾಧಾರ ಸ್ವಾದಿಷ್ಟಾನದ ನಡುವೆ ಮೂರೂವರೆ ಸುತ್ತು ಹಾಕಿದ ಸರ್ಪ ಶಕ್ತಿಯೇ, ಕುಂಡಲಿನಿಯೇ ,
ಸಹಸ್ರಾರ ಚಕ್ರದಲ್ಲಿ ಅರಳುವ ಮುನ್ನ ,ಮೂಲಾಧಾರದಿಂದ ಹೊರಟು ಹತ್ತಿ ನರ್ತಿಸು ಮಣಿಪೂರದೊಳಗೆ .
ಅನಾಹತ ,ವಿಶುದ್ದ ,ಅಜ್ಞಾಗಳ ಆವರಿಸಿ ,ಸೂರ್ಯನಾಡಿಯಲಿ ಏರಿ ,ಸಹಸ್ರಾರದ ಸುತ್ತು ಬಂದು ಚಂದ್ರ ನಾಡಿಯಲ್ಲಿಳಿದು 
ಸುಶುಮ್ನಾದಲ್ಲಿ ಮೂರು ದ್ವಾರಗಳ ಹತ್ತಿ ಪ್ರವಹಿಸಿ ನಾಡಿಗಳಿಗೇರಿ ಕುಂಡಲಿನೀ ನೀ ಸಂದ್ಯಾದೇವಿ,ಆದಿಶೇಷಶಕ್ತಿ
ಶಿವನೊಡನೆ ಸಂಯೋಗ ಪಡೆದು ಲೀನವಾಗು ಬ್ರಹ್ಮಾನಂದದಲಿ .
ಉಜ್ಜ್ವಲಿಸು ನೀಲ ಪ್ರಭೆಯಲಿ ,ನೀಲಮಣಿ ಜ್ಞಾನ ಹೊಂದಿ ,ಪ್ರಭಾವಳಿಯಲಿ ಆಧ್ಯಾತ್ಮದ ಬೆಳಕು ಚೆಲ್ಲಿ .
ಈ ದೇಹದೇಗುಲದ ಅಣುಅಣುವಿನಾ ಸರ್ವಶಕ್ತಿಯನೂ ಹರಿಸು ಸ್ವಜ್ಞಾನಕ್ಕೆ, ಲೋಕೋಧ್ಹಾರಕ್ಕೆ ,ಬೆಳಕಿಗೆ ಸದಾ ...........

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ