೧
ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ (೨೨ ಜುಲೈ ೧೩ )
ಆಷಾಡ ಹುಣ್ಣಿಮೆಯ ಗುರುಪೂರ್ಣಿಮಾ ನಮಗೆ ಗುರುವಂದನಾ
ಶಿಷ್ಯರೆಲ್ಲರೂ ಸೇರಿ ಗುರುವಿಗೆ ನಮಸ್ಕರಿಸುವ ಸುದಿನ
ಸುಂದರ ಸಮಾಜ ನಿರ್ಮಾಣದಲಿ ತೊಡಗಿದವರಿಗೆ ಗುರು ಪ್ರಣಾಮ
ಗುರು ಪೂರ್ಣಿಮಾ ಚಾತುರ್ಮಾಸ್ಯವ್ರತವ ವ್ಯಾಸರ ಪೂಜೆಯಿಂ ಪ್ರಾರಂಭ
ಚಾತುರ್ಮಾಸ್ಯ ವ್ರತ ಶ್ರದ್ಧಾ ಭಕ್ತಿಗಳಿಂ ಆಚರಿಸು ,ಸಮೃದ್ಧ ಆಹಾರ,
ಸೌಂದರ್ಯ, ಸದ್ಬುದ್ಧಿ, ಸತ್ಸಂತಾನ ದೊರೆಯಲಿ
ಈ ಸುದಿನ ವೇದವ್ಯಾಸರು ಬ್ರಹ್ಮ ಸೂತ್ರ ಬರೆಯಲು ಪ್ರಾರಂಭಿಸಿದ್ದು
,ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ
ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು
ಗುರು ಪೂರ್ಣಿಮಾ ದಿವಸ-ವೇದವ್ಯಾಸ’ ಸಾಂಕೇತಿಕಾರ್ಥವುಳ್ಳ
ರಹಸ್ಯಪೂರ್ಣ ವ್ಯಕ್ತಿತ್ವದ ಮಾಂತ್ರಿಕ. ಆಧ್ಯಾತ್ಮ, ಇತಿಹಾಸ,
ಜ್ಞಾನ, ವಿಜ್ಞಾನಗಳ ಕಣಜ , ವ್ಯಾಸ ಮಹರ್ಷಿಎಂದೇ ಪ್ರಸಿದ್ಧರಾದ
ಕೃಷ್ಣ ದ್ವೈಪಾಯನರ ವೇದಾಧ್ಯಯನ ಸೇವೆ ಅನನ್ಯ ,ಅಂದಿನ
ವೇದಮಂತ್ರಗಳನ್ನು ಯಜ್ಞಕಾರ್ಯಗಳ ಅನ್ವಯವಾಗಿ ಬೋಧಿಸಿದರು.
ವೇದಮಂತ್ರಗಳನ್ನು ಪರಿಷ್ಕರಿಸಿ ನಾಲ್ಕು ವೇದಗಳಾಗಿ ವಿಂಗಡಿಸಿ
''ವೇದವ್ಯಾಸ'' ಎಂಬ ಬಿರುದಾಂಕಿತ ಈ ಮಹತ್ಕಾರ್ಯದಲಿ
''ಗುರು ''ಎಂಬ ಕೀರ್ತಿಗೆ ಪಾತ್ರರು.
ನಾವು ಜನ ಸಾಮಾನ್ಯರು ನಮಿಸುವ ಶಿಷ್ಯರಾಗಿ ಎಲ್ಲ ಗುರುಗಳಿಗೆ
ನಾಳಿನ ಭವ್ಯ ಭಾರತ ನಿರ್ಮಾಣಕ್ಕೆ
ನಿಮ್ಮೊಳಗಿನ ಗುರುವ ಗೌರವಿಸಿ ,ಹೊರಬರುವುದೇ ಅಮೃತ
ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ (೨೨ ಜುಲೈ ೧೩ )
ಆಷಾಡ ಹುಣ್ಣಿಮೆಯ ಗುರುಪೂರ್ಣಿಮಾ ನಮಗೆ ಗುರುವಂದನಾ
ಶಿಷ್ಯರೆಲ್ಲರೂ ಸೇರಿ ಗುರುವಿಗೆ ನಮಸ್ಕರಿಸುವ ಸುದಿನ
ಸುಂದರ ಸಮಾಜ ನಿರ್ಮಾಣದಲಿ ತೊಡಗಿದವರಿಗೆ ಗುರು ಪ್ರಣಾಮ
ಗುರು ಪೂರ್ಣಿಮಾ ಚಾತುರ್ಮಾಸ್ಯವ್ರತವ ವ್ಯಾಸರ ಪೂಜೆಯಿಂ ಪ್ರಾರಂಭ
ಚಾತುರ್ಮಾಸ್ಯ ವ್ರತ ಶ್ರದ್ಧಾ ಭಕ್ತಿಗಳಿಂ ಆಚರಿಸು ,ಸಮೃದ್ಧ ಆಹಾರ,
ಸೌಂದರ್ಯ, ಸದ್ಬುದ್ಧಿ, ಸತ್ಸಂತಾನ ದೊರೆಯಲಿ
ಈ ಸುದಿನ ವೇದವ್ಯಾಸರು ಬ್ರಹ್ಮ ಸೂತ್ರ ಬರೆಯಲು ಪ್ರಾರಂಭಿಸಿದ್ದು
,ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ
ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು
ಗುರು ಪೂರ್ಣಿಮಾ ದಿವಸ-ವೇದವ್ಯಾಸ’ ಸಾಂಕೇತಿಕಾರ್ಥವುಳ್ಳ
ರಹಸ್ಯಪೂರ್ಣ ವ್ಯಕ್ತಿತ್ವದ ಮಾಂತ್ರಿಕ. ಆಧ್ಯಾತ್ಮ, ಇತಿಹಾಸ,
ಜ್ಞಾನ, ವಿಜ್ಞಾನಗಳ ಕಣಜ , ವ್ಯಾಸ ಮಹರ್ಷಿಎಂದೇ ಪ್ರಸಿದ್ಧರಾದ
ಕೃಷ್ಣ ದ್ವೈಪಾಯನರ ವೇದಾಧ್ಯಯನ ಸೇವೆ ಅನನ್ಯ ,ಅಂದಿನ
ವೇದಮಂತ್ರಗಳನ್ನು ಯಜ್ಞಕಾರ್ಯಗಳ ಅನ್ವಯವಾಗಿ ಬೋಧಿಸಿದರು.
ವೇದಮಂತ್ರಗಳನ್ನು ಪರಿಷ್ಕರಿಸಿ ನಾಲ್ಕು ವೇದಗಳಾಗಿ ವಿಂಗಡಿಸಿ
''ವೇದವ್ಯಾಸ'' ಎಂಬ ಬಿರುದಾಂಕಿತ ಈ ಮಹತ್ಕಾರ್ಯದಲಿ
''ಗುರು ''ಎಂಬ ಕೀರ್ತಿಗೆ ಪಾತ್ರರು.
ನಾವು ಜನ ಸಾಮಾನ್ಯರು ನಮಿಸುವ ಶಿಷ್ಯರಾಗಿ ಎಲ್ಲ ಗುರುಗಳಿಗೆ
ನಾಳಿನ ಭವ್ಯ ಭಾರತ ನಿರ್ಮಾಣಕ್ಕೆ
ನಿಮ್ಮೊಳಗಿನ ಗುರುವ ಗೌರವಿಸಿ ,ಹೊರಬರುವುದೇ ಅಮೃತ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ