''ಶ್ರೀ ಪಾದರಾಜರ ಕೃತಿಗಳು '' ಸಂಪಾದಕ ,ಡಾ .ವರದರಾಜರಾವ್ ಕನ್ನಡ ಅದ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ ''ಶ್ರೀ ಪಾದರಾಜರ ಕೃತಿಗಳು ''ಹರಿದಾಸ ಸಾಹಿತ್ಯದ ಈ ಶಾಸ್ತ್ರೀಯ ಆವೃತ್ತಿಯು ಸುಂದರವಾಗಿ ವಿನ್ಯಾಸಗೊಂಡಿದೆ ಹರಿದಾಸರಲ್ಲಿ ಮೊದಲಿಗರಾದ 'ಶ್ರೀ ಪಾದರಾಜರ ಕೀರ್ತನೆ ಗಳ ಸಂಪುಟ ,ಶ್ರೀ ಪಾದರಾಜರ ಜೀವನ ಕೃತಿಗಳನ್ನು ಕುರಿತ ವಿಸ್ತಾರವಾದ ವಿವರಣೆಯನ್ನೂ,ಸೂಚಿಗಳನ್ನೂ ,ಹೊಂದಿಸಲಾಗಿದೆ . ಇದುವರೆಗೆ ಪ್ರಕಟವಾಗದ ಕೀರ್ತನೆಗಳನ್ನು ಹೊಂದಿರುವುದೇ ಈ ಪುಸ್ತಕದ ವಿಶೇಷ . ಶ್ರೀ ಪಾದರಾಜರ ಜೀವನ ಪರಿಚಯ ,ಕೃತಿಗಳ ಅವಲೋಕನ ,ಶ್ರೀ ಪಾದರಾಜರ ಕೃತಿಗಳ ಸುಂದರತೆ ,ಪ್ರತೀ ಕೀರ್ತನೆಯ ಅರ್ಥ ,ಲಘು ಟಿಪ್ಪಣಿಗಳು ಪುಸ್ತಕದ ಸಂಗೀತ ಸವಿ ಹೆಚ್ಚಿಸಿದೆ . ಸ್ವರ ಪ್ರಸ್ತಾರದ ವಿವರಣೆಯೊಂದಿಗೆ ಸಂಪೂರ್ಣವಾಗುವ ''ಶ್ರೀ ಪಾದರಾಜರ ಕೃತಿಗಳು''ಸಂಗೀತ ಪ್ರೇಮಿ ಗಳು ಮಾತ್ರವಲ್ಲ , ಎಲ್ಲರೂ ಓದಬೇಕಾದ ಪುಸ್ತಕ . ಕೀರ್ತನೆ,ರಚನೆಗಳೊಂದಿಗೆ ಈ ಸಾಂಸ್ಕೃತಿಕ ದಾಸ ಪರಂಪರೆ ,ದಾಸ ಶ್ರೀಮಂತಿಕೆಯಲ್ಲಿ ಜನಪ್ರಿಯವಾಗಿ ಜನರ ಬಾಯಲ್ಲಿ ಕೀರ್ತನೆಗಳಾಗಿ ತಲೆಮಾರಿನಿoದ ನಿಂತಿವೆ . ದಾಸ ಸಾಹಿತ್ಯ ಈ ನಾಡಿನ ಶ್ರೀಮಂತ ಪರಂಪರೆ .
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ