ಗುರುವಾರ, ಜುಲೈ 11, 2013

ಶಿರಡಿ ನೆಲದಲಿ -ಸಾಯಿ ಸನ್ನಿಧಿಯಲಿ 

ಕಮಲಗಳರಳೆ ಹೃದಯದಲಿ ,ನಿನ್ನ ಪದತಲದಲ್ಲಿ ಇರಿಸಿ ,ಧನ್ಯಳಾದೆನು ಶಿರಡಿ ಬಾಬಾ 
ವರುಷಗಳಿಂದ ಕಾದ ಶಿರಡಿ ನೆಲ ಸೋಂಕಿದೊಡನೆ ರೋಮಾoಚನದ ನೀಲಿ ಮಿಂಚು 
ಮನ ನಡುಗಿ ಹೊಂದಿಕೊಂಡಿತು ನಿನ್ನ ಪ್ರಭೆಯಾವರಣಕೆ ,ಮನಸು ಒಪ್ಪಿಸಿತು ರಾಶಿ ನಮನ 
ಪುಷ್ಪ ಫಲಗಳ ಕಾಯುವಿಕೆಗೆ ತಾಳದೇ ಧಾವಿಸಿದೆ ಧರ್ಶನದ ಶುಭ ಗಳಿಗೆಗೆ ಜನಸ್ತೋಮದ ನಡುವೆ

ಭಜನೆ ಘೋಷಗಳ ಹಿತದ ಕೂಗುಗಳಿಗೆ ನನ್ನೆದೆಯಲೂ ಹರ್ಷನಾದ ,ಆರತಿಯ ಮಂಗಳದಲಿ ಸುನಾದ
ಮಂಟಪಗಳಲಿ ಕುಳಿತು ಪರವಶರಾದ ಜನರ ಕಂಡೆ ,ನಿನ್ನ ಕಂಡು ಕಣ್ನೀರಲಿ ನೆನೆದ ಕೆನ್ನೆಗಳಲ್ಲೂ ಗುಲಾಬಿ ನಗು
ಭುವಿಯ ಸಂಗದಿಂದಾಚೆ ಸಮಾಧಿಯಲಿ ಹರಸಿ ,ನಿಜಪ್ರಕಾಶಗಳ ಪಸರಿಸುವ ಪ್ರೇಮ ಸಾಧುವೇ ಅಶೀರ್ವದಿಸು
ಮಗುವಿನೋಪಾದಿಯಲಿ ನಿನ್ನ ತೊಡೆಯೇರುವ ಈ ಲಕ್ಷೋಪಲಕ್ಷ ಮಕ್ಕಳನು ಪಾಲಿಸಿ ಓಲೈಸು

ಈ ಮನೆಯ ಬೆಳಕು ಹಚ್ಹಿದ ದಿನದಿoದ ಈ ಬೆರಳುಗಳ ನಮಸ್ಕಾರಗಳ ,ಬೇಡಿಕೆಗಳ ,ಅಂತರಂಗದ ಅಬಿವ್ಯಕ್ತಿಗಳ
ಬದಲಾದಂತೆ ಎರಡೆಣಿಸದೇ ಹರಸುತ್ತಿರುವೆ ,ಸಂಸಾರದ ನಗು ,ನೋವು ,ಸುಖ ,ಕಷ್ಟಗಳಲಿ ಭುಜದಮೇಲೊoದು ಕೈ
ಭರವಸೆಯ ,ಜೀವನ ಅರೋಗ್ಯ ದಾನ ಕರುಣಿಸಿರುವೆ ,ಎದೆಯಲ್ಲಿ ಹನುಮನ್ನಿರಿಸಿ ರಾಮ ರಾಮ ಎಂದು ,ದುರ್ಗೆಗೆ
ಕೋಟಿ ನಮಿಸಿ ,ಸಾಯಿಯಲಿ ಶರಣಾಗತಿಗೊಪ್ಪಿಸಿ ಗುರುಸೇವೆ ಒಪ್ಪಿದ ಮಹಾತ್ಮನೇ ,ಪುನರ್ಧರ್ಶನಂ ಪ್ರಾಪ್ತಿ ರಸ್ತು ಎಂದು ಹರಸು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ