ಶನಿವಾರ, ಜುಲೈ 13, 2013

ಅನಿಸಿಕೆಗಳ ಸುಭದ್ರ ಕೋಟೆಯೊಳಗೆ ನನ್ನ ಹುಗಿದಿಡಬೇಡ 
ಕೆಳೆದುಕೊಳ್ಳುವೆ ನನ್ನ ನಾನಲ್ಲದವಳನ್ನ ,
ಕೆಟ್ಟ ಗಾಂಬೀರ್ಯದ ಹಿಂದೆ ,ಮನಬಿಚ್ಚಿನಗುವ 
ಸ್ನೇಹದ ಬೆಸುಗೆಗೆ, ಆಯಿತು ಬಿಡು ಅನ್ನಬೇಡ -ನಾನಿಲ್ಲ ಅಲ್ಲಿ 

ಮಾತುಗಳ ಮೌನದಾಚೆ ಉಳಿದ ಕೊಪ್ಪರಿಗೆ ಪ್ರೀತಿಯ
ಹೊತ್ತು ಓಡುವೆನೆಂಬ ಅನಿಸಿಕೆ ಬೇಡ -ವಜ್ರ ವಿಷ .
ಬಂಡೆಗಲ್ಲಿನ ಭಾರದಿ ಮೈಚಾಚಿ ಮಲಗಬಲ್ಲೆ ನಿನ್ನೊಳಗೆ
ತೆರೆದು ಮಾತಾಡು ,ಒಪ್ಪಿಕೋ ಬೆರಳ ಬಳಸಿದ್ದನ್ನ ......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ