ಗುರುವಾರ, ಜುಲೈ 11, 2013

ಕೇಸರೀ ದ್ವಜದ ಪಂಡರಾಪುರ ಯಾತ್ರೆ 
ಪಂಡರಾಪುರಕ್ಕೆ ಹೊರಟ ವಿಠಲನ ಭಕ್ತರ ಪಾದ ಯಾತ್ರೆಯ ನೋಡಿದೆ 
ಪೂಣೆಯಿಂದ ಶಿರಡಿಯವರೆಗೂ ಭಕ್ತಿ ಗಾನಗಳ ಭಜನೆಗಳ ಸಾವಿರ ಸ್ವರ ಕೇಳಿದೆ ,
ಇಂದು ಆಷಾಡದ ಮೊದಲ ದಿನ ,ಬರುವ ಏಕಾದಶಿಗೋ ವಿಠಲನ ದರ್ಶನ ........ 
ಸುಂದರ ಸೊಂಟದ ಮೇಲೆ ಕೈಇಟ್ಟುಕೊಂಡು ಇಟ್ಟಿಗೆಯ ಮೇಲೆ ನಿಂತ ಪ್ರಭುವೇ 
ಕೊರಳಲ್ಲಿ ತುಳಸೀಮಾಲೆ ಪೀತಾಂಬರವ ತೊಟ್ಟ ಪ್ರಿಯ ಮೂರ್ತಿಯೇ ,
ಮೀನಾಕಾರದ ಕುಂಡಲ ,ಕೊರಳಲಿ ಕೌಸ್ತುಭ ,ವಿಠಲನೇ ಪುಣ್ಯವಂತರಿವರು ,
ನನಗಾವಾಗ ದರುಶನ ಪ್ರಭುವೇ ?ಈ ಗುಂಪುಗಳ ಉತ್ಸಾಹದಲಿ ಹೃದಯ ಬೆರೆಸಿಹೆನು .
ಕ್ಷಣ ಕಾಲ ನಿನ್ನ ಬಾಗಿಲಲಿ ನಿಂತು ನಾಲ್ಕು ಮುಕ್ತಿ ಪಡೆದವರೊಂದಿಗೆ ಸೇರಿಸೆನ್ನ
ಸಲೋಕತ ,ಸಮೀಪತಾ ,ಸರೂಪತಾ ,ಸಾಯುಜ್ಯತಾ ನಾಲ್ಕೂ ಮುಕ್ತಿ ಬೇಕೆನಗೆ ,
ಸಂಸಾರದಲ್ಲಿದ್ದೂ ಹರಿ ಹರಿ ಎಂದು ನಾಮ ಸ್ಮರಣೆ ಮಾಡುವೆನು ,
ಒಮ್ಮೆ ಬಂದುಬಿಡು ಎಂದೂ ಸದಾ ನನ್ನಲ್ಲಿರುವಂತೆ ಪಾಂಡುರಂಗ ವಿಠಲ.
ಪಂಡರಾ ಪುರವ ತೋರಿಸು ಇಂದೇ ಕನಸಿನಲ್ಲಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ