ಸ್ನೇಹದ ಸುತ್ತ ಕವಿದ ನೆರಳು
ನೆಲವೇ ನಡುಗಿ ನಿಂತ ಪಾದಗಳಡಿಗೆ ಬೆಂಕಿಯ ರಾಶಿ ಹಾಕಿದಾಗ
ಹತ್ತಿ ಉರಿವ ದೇಹದ ಹಿಂಸೆ ತಾಳಲಾರದೇ ಜೀವ ಓಡಿ ಹೋಗುತ್ತದೆ
ಪ್ರಾಣವನ್ನೇ ಹಿಂಬಾಲಿಸಿ ನಡೆಯುತ್ತಿರುವೀ ನೆರಳನ್ನು ಕಂಡಾಗ
ಉಸಿರಾಟದ ಉಕ್ಕುವ ತಿದಿಯನ್ನ ತಾಳಲಾರದೆ ಮನಸ್ಸು ಕರಗುತ್ತಿದೆ
ಎಣಿಕೆಯ ಒಂದೊಂದೇ ಅಕ್ಷರಗಳನ್ನು ಹೃದಯ ಹೆಕ್ಕಿ ಕೊಂಡಾಗ
ದೇಗುಲದೆದುರು ನೆಲದಲ್ಲಿ ಹರವಿದ ನಾಣ್ಯದಂತೆ ನೋವಾಗುತ್ತದೆ
ಎಳೆಯ ನಡುವೆಯೂ ನಾನಾ ಪ್ರಶ್ನೆಗುತ್ತರಿಸದ ನನ್ನದೇ ಮನಸ್ಸೂ
ಎಲ್ಲೂ ನಿಲ್ಲದ ನಿರಂತರತೆಯ ನದಿಯಂತೆ ಸಮುದ್ರದತ್ತ ಹಿಗ್ಗಿದೆ
ನೀಲಾಕಾಶದ ಉದ್ದಗಲಗಳ ಅಳತೆ ತಪ್ಪುವಾಗಲೂ ಸಶಬ್ದವಾದ
ಎದೆಬಡಿತವೂ ಸುಟ್ಟು ಕಳೆಯೊಂದಿಗೆ ನನ್ನ ಬೆಳೆಯನ್ನು ನಾಶವಾಗಿಸಿದೆ
ಸ್ನೇಹದ ಸುತ್ತ ಕವಿದ ಈ ನೆರಳು ,ನೆರಲಾಗದೇ ಹತ್ತಿ ಉರಿವ
ಅಗ್ನಿ ಕುಂಡವಾಗಿ ಆರಿದ ನಂತರವೂ ನಿಗಿಯುವ ಕೆಂಡವಾಗಿದೆ
ನೀರಿನಲ್ಲಿ ಮುಳುಗುವ ಕೊನೆಯಿರದೇ ಪ್ರವಹಿಸಿ ನಡೆವ ಯಾತ್ರೆಯಂತೆ
ಜೀವನ ಚಕ್ರ ಚಲಿಸುತ್ತಿದೆ ,ಇರಬಹುದೇ, ಇರಲೇ ಬಾರದೇ ಉಸಿರು ಎಂದು ?
ಬದುಕಿರಬೇಕೆ ?ಎಂದು ಕೇಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ