ಗುರುವಾರ, ಜುಲೈ 11, 2013

''ಅತ್ಯುತ್ತಮ ಸಣ್ಣ ಕತೆಗಳು ''೧ ೨ ಕಥೆಗಳ ಸಂಕಲನ .ಸoಪಾದಕರು -ಕೆ .ನರಸಿoಹಸ್ವಾಮಿ ,ಕನ್ನಡ ಸಾಹಿತ್ಯ ಪರಿಷತ್ತು . ಈ ಕಥಾ ವಸ್ತುವಿನ ತಂತ್ರ ವೈವಿದ್ಯತೆ ವಸ್ತು ಮನಮುಟ್ಟುತ್ತ ದೆಂದರೆ ,ವಸ್ತುವಿನ ನವೀನತೆ ,ಒಳಮನಸ್ಸಿನ ತಾಕಲಾಟ ಗಳು ,ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ . ಮೊದಲ ಕಥೆ ''ಗಿರಿಜೆ ಕಂಡ ಸಿನಿಮಾ''-ಶ್ರೀ ಬಸವರಾಜ ಕಟ್ಟಿಮನಿ , ನಾಲ್ಕು ಮೊಳ ಭೂಮಿ -ಶ್ರೀ 'ಚದುರಂಗ'ರದು, ''ದೇವರೇ ಬರಲ್ಲಿಲ್ಲ ''-ಶ್ರೀ ಎಸ್ . ಅನಂತ ನಾರಾಯಣದವರದು , ''ಮುಕ್ಕಣ್ಣನ ಮುಕ್ತಿ '' -ಶ್ರೀ ಕೋ .ಚೆನ್ನಬಸಪ್ಪ , ''ದ್ಯಾಮ-ಕೆಂಚಿ''-ಶ್ರೀ 'ವರಗಿರಿ'ಯವರದು,''ಮುಯ್ಯಿ ''-ಶ್ರೀ ಎಲ್ .ಎಸ್ .ಶೇಷ ಗಿರಿರಾವ್ ,''ಬಾಗಿಲು ತೆರೆದಿತ್ತು ''-ಶ್ರೀ ವರದರಾಜ ಹುಯಿಲುಗೋಳರದ್ದು ,'' ನಮ್ಮೂರ ನಾಯಕರು ''- ಶ್ರೀ ಮಿರ್ಜಿ ಅಣ್ಣಾರಾಯ ,೧ ರಾಮ ರಾಜ್ಯ ೨ ಅನುಭವಾಮೃತ ೩ ಗುಪ್ತಚಾರ -ಶ್ರೀ ವಿ ಜಿ ಭಟ್ಟರದು ,''ಭೂಮಿ ಕಂಪಿಸಲ್ಲಿಲ್ಲ ''-ಶ್ರೀ ಶ್ರೀಕಾಂತ , ''ನಲ್ಲಿಯಲ್ಲಿ ನೀರು ಬಂದಿತು ''-ಶ್ರೀ ಸದಾಶಿವ ದವರದು. ಒಂದಕ್ಕಿಂತ ಒಂದು ಸುಂದರವಾದ ಕಥೆಗಳು ನವೀನವೂ ಸರಳವೂ ಈ ಬರಹಗಳು ,ದುಃಖ ,ತಿಳಿ ಹಾಸ್ಯ ,ಬಡತನ ,ಶಿಸ್ತು ,ಮಾನವೀಯ ಮೌಲ್ಯಗಳು ಕಥೆಗಳನ್ನು ವಿಶೇಷವಾಗಿಸಿವೆ . ಹೊಸಗನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಸಣ್ಣ ಕಥೆ ಪ್ರಮುಖ ಪಾತ್ರ ಹೊಂದಿರುವುದು, ಈ ಕಥೆಗಳ ಚೆಲುವನ್ನ ಅಮೂಲ್ಯವಾಗಿಸಿದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ