ಗುರುವಾರ, ಸೆಪ್ಟೆಂಬರ್ 8, 2016

ಕಾಲ್ನಡಿಗೆಯಲ್ಲೇ ಕನಸ ನಡೆದು
ಆಕಾಶವೇರಿ ಕುಳಿತ ಮೇಲೆ
ಇಳಿವ ಎಚ್ಚರ ಮರೆತಿದೆ
ಏಕೆ ಹೇಳಲಿ , ಉಳಿವಿಗೆ ಬಯಕೆಯ
ಹೃದಯ ತಪ್ಪಿ ಬಡಿದಿದೆ...
ಅವನ ಮಿಂಚಿನ ಕಣ್ಣ ಕೊನೆಯಲಿ
ಕರೆದ ಸನ್ನೆಗೆ ಬೆಚ್ಚಿದೆ
ಕಣ್ಣ ಮುಚ್ಚದೇ ನೋಡಲೆನ್ನಯ
ಹಗಲೂ ರಾತ್ರಿಗೆ. .ಕಾತರ
ಅವನ ತೋಳಿನ ಒಂದೇ ಹರವಿಗೆ
ಒಲವ ಸುರಿಯುವ ಆತುರ
ತಾಳ್ಮೆ ತಪ್ಪುವ ದಿನಗಳೆಣಿಸುತಾ
ಕಳೆದ ಕ್ಷಣಗಳು ಸಾವಿರ
ಅವನ ನೋಡುವ ಕನಸ ಕಣ್ಣಲಿ
ಬಿ0ಬ ತು0ಬುತಾ ಚಂದಿರ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ