ಗುರುವಾರ, ಸೆಪ್ಟೆಂಬರ್ 8, 2016

ಕಾವಿ ವಸ್ತ್ರದ ತುದಿಗೆ
ಬರಬಾರದ ರಂಗೋಲಿ
ಮನೆ ನಡುವಲಿ ಹರವಿದ್ದು
ಯಾತರದ ಗುಟ್ಟೋ
ಬೆನ್ನು ಮೂಳೆಯ ಮರ್ಮ
ತೆರಿದಿಡುವ ಹಾವಿಗೆ
ನಡುಗುಂಟ ಸುತ್ತಿ ಕಾದಿದ್ದು ಗೊತ್ತೋ
ನಡೆನಡೆಯೋ ಸಂತನೇ
ನೀ ಕಟ್ಟಿದ ಗಂಟಿಗೆ
ವಿಷದೂಟ ಬರೆದಲ್ಲಿ
ಮುಕ್ಕಣನ ತೇಜಸ್ಸು
ಉಮ್ಮಳಿಸಿ ಬಿತ್ತೋ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ