ಭಾನುವಾರ, ಸೆಪ್ಟೆಂಬರ್ 1, 2013

''ಹಿಮಾಲಯ ಗುರುವಿನ ಗರಡಿಯಲ್ಲಿ ''

ಗೌರಿ ಗಂಗಾಧರ್ ನನಗೊಂದು ಪುಸ್ತಕವನ್ನು ಪ್ರೀತಿಯಿಂದ ಕುಂಕುಮ ಹಚ್ಚಿ ಕೊಟ್ಟರು. ''ಹಿಮಾಲಯ ಗುರುವಿನ ಗರಡಿಯಲ್ಲಿ ''

ಅತ್ಯಂತ ಅಮೂಲ್ಯವಾದ ಈ ಪುಸ್ತಕ ನನ್ನದೇ ಬದುಕಿನ ಹಲವು ಅನುಭವಗಳಂತೆ ಕಂಡಿತು . ವಿಸ್ಮಯವೆಂದರೆ ಆ ಪುಸ್ತಕದಲ್ಲಿ ಗೌರಿಯವರೂ ,ಗಂಗಾಧರ್ ಅವರೂ ಇದ್ದರು ,ಆಧ್ಯಾತ್ಮ ದ ದೀಪ ಹಚ್ಚಿ ಕುಳಿತು ನನ್ನೊoದಿಗೇ ಬೆಳಕಿನ ಸಾರ್ಥಕತೆ ಕಂಡದ್ದ್ದು ಸಿಹಿ ಅನುಭವ . ಜೀವನದ ಅತ್ಯಂತ ಪ್ರಮುಖ ತಿರುವಿನಲ್ಲಿ ಭೇಟಿಯಾದ ಈ ಜೀವಿಗಳ ಕಾರುಣ್ಯ ಬದುಕಿನ ಸಿದ್ದಿ . 

ಬನ್ನಿ , ಪುಸ್ತಕ ಹೇಗಿತ್ತು ಎಂದು ನೋಡುವ ಒಮ್ಮೆ ''ಹಿಮಾಲಯ ಗುರುವಿನ ಗರಡಿಯಲ್ಲಿ '',ಹೆಸರೇ ಹೇಳುವಂತೆ ಗುರುವನ್ನರಸಿ ಒಂದು ಪಯಣದ ಕಥೆ ,ಸಾಧನೆಗಳು ಸಾವಿರಾರು ,ಪ್ರತಿ ಪುಟದಲ್ಲೂ ಅನುಭವದ ವಾತ್ಸಲ್ಯಭರಿತ ಪಾಠ ಜೀವನದಲ್ಲಿ ಬೇಕಾ ದನ್ನು ಬಿಟ್ಟು ಬೇಡದರ ಎದೆಗೆ ತುಡಿವ ಜೀವನವನ್ನ ,ಮಮಕಾರಗಳ ಸಹ್ಯತೆಯನ್ನ ತಿಳಿಸುತ್ತಾ ,ಆ ಲೋಕಕ್ಕೆ ಕರೆದುಕೊಳ್ಳುವ ಮಹಾಗಾಥೆ ,ಆಧ್ಯಾತ್ಮ ಉನ್ನತ ಸ್ತರದಲ್ಲಿ ನಮ್ಮ ಎತ್ತರ ಮೀರಿ ಪುನಃ ಸಾಧಾರಣಕ್ಕಿಳಿದು ಹಿಮಾಲಯದ ಶೃಂಗಗಳ ಅಗಾಧತೆಯೂ ರಹಸ್ಯದ ಬಿಡಿಸಲಾಗದ ಒಗಟುಗಳನ್ನು ಮಹಾಗುರುಗಳ ರೂಪದಲ್ಲಿಡುತ್ತಾರೆ .

ಯುವಕನೊಬ್ಬ ಕಡಲ ಧಕ್ಷಿಣದಿಂದ ಪಯಣಿಸಿ ,ಗೆದ್ದು ಬೆಳಕಿನ ಜೀವನ ಪಡೆದು ,ಹಲವು ಜೀವಗಳಿಗೆ ಹೊಸ ದಶೆ ತೋರಿಸಿದ ಅದ್ಭುತ ಬರಹ .

ಹೃದಯಪೂರ್ವಕ ವಂದನೆಗಳು ನಿಮ್ಮ ಪ್ರೀತಿಗಾಗಿ ,......... .... ... ಗೌರಿ ಮತ್ತು ಗಂಗಾಧರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ