ಮಂಗಳವಾರ, ಸೆಪ್ಟೆಂಬರ್ 24, 2013

ಬಾಲಸುಬ್ರಹ್ಮಣ್ಯ ನ ಹಬ್ಬ

ಬಾಲಸುಬ್ರಹ್ಮಣ್ಯ ನ ಹಬ್ಬ 

ಆಡಿ ಕೃತ್ತಿಕೆ ನಾಳೆ ,ಇಂದು ಭರಣಿ ಕಾವಡಿ 
ಬಾಲಸುಬ್ರಹ್ಮಣ್ಯ ನ ನೆನೆಯಿರಿ 
ಕಾವಡಿಯನ್ನು ಹೊತ್ತು ದೇಗುಲದತ್ತ 
ಹೆಜ್ಜೆ ಹಾಕುವಾಗ ಹರಕೆ ಹೊತ್ತವರು
ಆತ್ಮೀಯರು ಏಕ ದನಿಯಲ್ಲಿ
'''ಹರೋಹರ' ''ಎಂದು ಕೂಗುವರು
ಬಾಲಸುಬ್ರಹ್ಮಣ್ಯನ ನೆನೆವರಿಂದು
ಬೇಡಿಕೆ ಈಡೇರಿಸುವ ಕಾಮಧೇನು-
ಕಲ್ಪವೃಕ್ಷ ವವನು ಮುರುಗ
ಭಕ್ತರು ಕಾವಡಿಯನ್ನು ಹೊತ್ತು ತಂದು
ಹರಕೆ ತೀರಿಸಿ ಧನ್ಯರಾಗುವರು
ಮೊದಲನೇ ದಿನ ಭರಣಿ ಕಾವಡಿ.
ಎರಡನೇ ದಿನ ಆಡಿ ಕೃತ್ತಿಕೆ.
ಕಾವಡಿಗಳಲ್ಲಿ ನವಿಲು ಕಾವಡಿ, ಜೇನು ಕಾವಡಿ,
ಹಾಲು ಕಾವಡಿ, ಪುಷ್ಪ ಕಾವಡಿ ಸೇರಿ
ಹಲವು ಬಗೆಯ ಕಾವಡಿಗಳನ್ನು ತಂದು,
ಹರಕೆ ತೀರಿಸಿ ಬಾಲಸುಬ್ರಹ್ಮಣ್ಯ ಸ್ವಾಮಿಯಲ್ಲಿ
ಮೊರೆ ಇಡುವರು ''ಅಪ್ಪಾ ಮುರುಗಾ'' ಎನುವರು
ಬಾಲಸುಬ್ರಹ್ಮಣ್ಯ ಮಹಾ ಹೃದಯಸ್ಥ ಸ್ವಾಮಿ
ಭಕ್ತರು ಒಂದು ದಂಡದ ಎರಡೂ ಬದಿಗೆ
ಬುಟ್ಟಿಯನ್ನು ಕಟ್ಟಿ, ಒಂದರಲ್ಲಿ ಪೂಜೆ ಸಾಮಗ್ರಿ,
ಇನ್ನೊಂದರಲ್ಲಿ ಹೂಗಳನ್ನಿಟ್ಟು ಹೊತ್ತು ತರುತ್ತಾರೆ.
ಕೆಲವೊಮ್ಮೆ ,................. ಇಲ್ಲಿ ದೇಗುಲದಲ್ಲಿ
ನಾಲಗೆ, ಕೆನ್ನೆಗೆ, ಚೂಪಾದ ಶೂಲದಿಂದ ಚುಚ್ಚಿ
ಬೆನ್ನಿಗೆ ಕೊಂಡಿಯ ಮೂಲಕ ಹಗ್ಗಕಟ್ಟಿ ತೇರನ್ನು
ಮನೆ ಬಾಗಿಲಿನಿಂದ ದೇಗುಲದ ವರೆಗೆ ಎಳೆದು ತರುವರು
ಬಾಲ ಸುಬ್ರಮಣ್ಯನ ಭಕ್ತರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ