ಶುಕ್ರವಾರ, ಮೇ 2, 2014

ಎಲ್ಲಿದ್ದೀರಿ ನೀವು 

ಬರಹದಾಚೆ ತೆವಳುತ್ತಿರುವ ತೇಪೆ ಬೇಕಿರುವ ಹೃದಯ ನೋಡಿದೆ 
ಒಂದಷ್ಟು ನೀರೂ ,ಎಲೆ ಮೇಲೆ ಒಂದಷ್ಟು ಅನ್ನ ಹಾಕಿ ಸಾಕೂ 
ಅಂತ ಗೋಗೆರೆಯಿತು ... ಇರು ಮಗಾ ಫೋಟೋ ತೆಗೆದು 
ಕವನ ಬರೀತೀನಿ ಇವತ್ತಿನ ಸ್ಟೇಟಸ್ ಮಸ್ತಾಗಿರೂತೆ ಅಂದೇ 
ಹೊಟ್ಟೆ ಬೆನ್ನಿಗ೦ಟ್ಕೊಂಡು ಎದೆ ಮೂಳೆ ಮದ್ಯೆ ಎದ್ದು ಎದ್ದು ಬೀಳ್ತಿದ್ದ 
ಪ್ಲಾಶ್ ಅಗ್ತಾ ಇರೋ ಫೋಟೋ ಜೊತೆಗೇ ಅವನ ಕಣ್ಣೀರೂ ಕೆನ್ನೆಗಿ೦ತಾ 
ಕೆಳಗಿಳಿದು ಅನ್ನದೊಳಗೆ ಬಿತ್ತು ..ಕೈ ಮುಗಿದೇ ಹೊರಟ ಬಿಡಿ ....

ಅನ್ನಕ್ಕಿಂತ ದೇವರಿಲ್ಲ /ಅತಿಥಿ ದೇವೋಭವ... ಅಕ್ಷರ ನೀವಿಹರು
ನೀವಿತ್ತ ಅನ್ನಕ್ಕೆ ಮೊಹರು ಬೇಕಿಲ್ಲ ಸ್ವಾಮಿ ,,,,,ಬೇಡಿದಾಗ
ತಟ್ಟೆಯಲ್ಲಿ ಒಂದು ರುಪಾಯಿ ಬಿಸಾಕಿದರೆ ದಯಾಮಯಿಯಲ್ಲ ನೀವು
ತಲೆ ತಗ್ಗಿಸಿ ನಡೆದು ಬಿಡಿ, ಬಡಿಸಿದ ತಟ್ಟೆಯಲ್ಲಿ ಒಂದಗುಳೂ ಅನ್ನ ಬಿಟ್ಟರೆ
ಹಸಿದು ಗಂಟಲು ಬಾಯಿಗ೦ಟಿ ಸಾಯುವವರ ಮು೦ದೆ ಕೂರಿಸಿ ಬಿಡುತ್ತೇನೆ
ಬಿರೋ ಬಿಸಿಲೋ ಮನೆಯೋ ಮಸಣವೋ ಅನ್ನದ್ದೇ ಪ್ರಶ್ನೆ ದೇಹ ದೇಗುಲಕ್ಕೆ
ಬೌದ್ದಿಕ ಸಾಂಗತ್ಯ ವಿಚಾರ ಧಾರೆ ಹೊಮ್ಮಿ ಕೊಟ್ಟದ್ದೇನು ಮೂರು ಅಣೆ
ಕೈ ಚಾಚಿದಲ್ಲಿ ತುತ್ತಿಟ್ಟು ಬಿಡಿ ಕರುಣೆ ಸಾಕು ತೆರೆದ ಕೈಯಲ್ಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ