ಶುಕ್ರವಾರ, ಮೇ 2, 2014

ಕೃಷ್ಣನೊಲವು 

ಕೃಷ್ಣಾ ನಿನ್ನ ನೆನೆದಾಗ ಕೊಳಲ ನಾದ ಹೃದಯ ತುಂಬಿ 
ಕಳೆದು ಹೋಗುವೆನು ದ್ವಾರಕೆಯ ದಾರಿಯಲಿ 
ನಿನ್ನೂರಿನ ಪರಿವಿರದೇ ಪಂಡರಾಪುರದ ಮೆರವಣಿಗೆಯ ನೆನಪಿನಲ್ಲಿ 
ಇಸ್ಕಾನಿನ ಸುಂದರ ಬಾಲಕೃಷ್ಣನ ಚಿತ್ರಗಳಲ್ಲಿ .... 
ನೆನಪಿನ ಚಿತ್ರಗಳಲ್ಲಿ ಬೆಣ್ಣೆ ತಿನ್ನುತ್ತಲೂ ತುಂಟ ನೋಟವೆಸೆಯುತ್ತಿ 
ಗೋಪಿಕೆಯರ ಸೀರೆಯ ಒಂದೊಂದೇ ಹಿಂತಿರಿಗಿಸುತ್ತೀ .. 
ಓಡಿ ಮರಗಳೆಡನು ತಳ್ಳಿ ಬೀಳಿಸುತ್ತೀ ... 
ಪಾರಿಜಾತದ ಸುಗಂಧವ ಸುತ್ತಲಿಗೆ ಸ್ವರ್ಗದಿಂದಿಳಿಸುತ್ತಿ 
ಭಾಮೆ ರುಕ್ಮಿಣಿಯರ ನಡುವೆ ರಾಧೆಯೊಡನೆ ಸರಸವಾಡುತ್ತಿ
ಆದರೂ ಕೃಷ್ಣ .. ಕೃಷ್ಣಾ ...ನೀನಿರದ ತಾಣವಿದೆಯೇ
ನನ್ನೀ ಪಯಣಕೆ ಅರ್ಥವಿದೆಯೇ ಹೇಳು ಒಮ್ಮೆ,..... ನಾ ನಿನ್ನೊಲವು
ನವಿಲು ಗರಿಯ ಸಮ್ಮೋಹನದಲಿ ಕೆನ್ನೆಗಾನಿಸಿ ಕೊಂಡು ನಿನ್ನ
ಮುತ್ತುಗಳ ಸವಿಯಲಿ ಜಗ ಮರೆತ ,ಪರಿವಿರದ ಕ್ಷಣಗಳ ನಿನಗರ್ಪಿಸುತಿಹೆ
ಕೊರಳ ಬಳಸಿ ತೂಗು ಬೀಳುವಾಸೆಯಿದೆ ಕರೆದುಕೋ ನನ್ನ ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ