ಶುಕ್ರವಾರ, ಆಗಸ್ಟ್ 30, 2013

ನಾನು ಹೆಜ್ಜೆಯಿಟ್ಟಲ್ಲಿ ಹಳ್ಳವಾಗುವ ವರ ಕೊಟ್ಟ ಕಾಳಿ 
ನನ್ನನ್ನು ಹೊತ್ತು ತಿರುಗುವ ಪಲ್ಲಕ್ಕಿ ರಾಜ ಭಟರ ಎಲ್ಲಿಟ್ಟಿದ್ದಾಳೆ ?
ನೋಟವಿಟ್ಟಲ್ಲಿ ಭಸ್ಮವಾಗುವ ಮೂರನೇ ಕಣ್ಣ ಮುಚ್ಚಿ 
ಅಂತರಂಗವ ಪ್ರಕಾಶದ ಮತ್ತೊಂದು ಭುವಿಯಾಗಿಸಿದ್ದಾಳೆ... 

ತ್ರಿಶೂಲದ ಕೊನೆಗೆ ಚುಚ್ಚಿಟ್ಟ ಹಣ್ಣುಗಳ ಹುಳಿ ರಸ ಹೀರಿ
ಮತ್ತವಾಗಿ ನರ್ತಿಸತೊಡಗಿದ್ದಾಳೆ ಹೆಜ್ಜೆಯಲಿ ರಕ್ತ ಊರಿ ..
ನೆಲವ ಎರಡಾಗಿಸಿ ನುಗ್ಗಿ ಪಾತಾಳದಲಿ ನನ್ನ ತುಳಿದು ..
ಎದ್ದೆಯಾದರೆ ನೆಲೆಯಿರದ ನೆಲವೆಂದು ಬೊಬ್ಬೆಗೈದು ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ