ಶುಕ್ರವಾರ, ಆಗಸ್ಟ್ 30, 2013

ಇರಲಾರೆ

ತಿದ್ದಿ ತೀಡಿ ಬರೆದು ಕೊಂಡ ನನ್ನ ಚಿತ್ರದ ಮೇಲೆ ನೀರು ಸುರಿದ ಪ್ರಿಯನೇ 
ತಂದು ಬಿಡು ಹೊದೆಯಲೊಂದು ವಸ್ತ್ರ ಮತ್ತು ಗಾದಿ 
ಕನಸು ಧಾವಿಸುತ್ತಿದೆ ಎದೆಯೊಳಗೆ .... ಮಾಡುತ್ತಿದೆ ಅಡಾಹುಡಿ 
ಉರುಳಿದರೆ ಗಮ್ಮತ್ತಿಲ್ಲದ .. ಸುರುಳಿಗನಸು ಹಾದು 
ನನ್ನ ನಿನ್ನ ನಡುವೆ ಬೇಡಿರದ ಮದ್ದಿನ ನಿದ್ದೆ ....ಕಾಟ 
ಸವಿದುಬಿಡು ಇಲ್ಲೇ ನೀರಾದ ಬಿಳಿ ವಸ್ತ್ರದ ಚೆಲುವ ..
ಅದನೂ ಬಿಟ್ಟು ಹೋಗಬೇಕಿದೆ ಕೋಟೆ ಕನಸ ಹಿತ್ತಲಿಗೆ
ಬೇಕಾದಂತೆ ಮೈಚಾಚಿ ಹೂವುದಿರಿಸಿಕೊಳ್ಳಲಿಕ್ಕೆ ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ