ಶುಕ್ರವಾರ, ಆಗಸ್ಟ್ 30, 2013

ನೋಡಲೇ ಬೇಕು .... ನೋಡಲೆಂದು ಹತ್ತಿದ ಹಿಮಾಲಯದ ತುದಿಗೆ ನಿಂತು ನೋಡಿದೆ ,
ನೀನು ಅಲ್ಲಿರಲಿಲ್ಲ ..ನನ್ನ ನೋಡಲು ಸಮುದ್ರಕ್ಕಿಳಿದಿದ್ದೆ ........ 
ಇಬ್ಬರೂ ಧಾವಿಸಿದಲ್ಲಿ ಭೂಮಿ ಪ್ರಕೃತಿಯ ಹೂ ಹಾಸು ,ಬಾ ಈ ಸ್ವರ್ಗದೊಳಗೆ

ರಕ್ತವ ನಿಲ್ಲಿಸಿ ನಾಳೆ ಹರಿಯಲು ವೇಗ ಸಾಲದು ಹರಿ ಮೆಲ್ಲಗೆ ಎಂದಿದ್ದೆ 
ನರನರಗಳ ನಾಡಿ ಮಿಡಿಸದೆ ನೀ ನಿಂತು ಸ್ವರ ತುಂಬಿದ್ದೆ
ಹರಿವ ರಕ್ತದ ನರನರದ ಪುಳಕಕ್ಕೆ ಹೊಸ ರಾಗ ಸೇರಿತಿಲ್ಲಿ ಬಾ ಗಾನ ಸ್ವರ್ಗದೊಳಗೆ

ಹಿಮವ ಕೂಡಿಸಿ ತಂಪಿನಲಿ ನಡುಗಿ ನಿನಗಾಗಿ ಮೊಗ್ಗುಗಳನಿಟ್ಟೆ
ನೀ ಬಿಸಿಯ ಉಸಿರುಗಳ ಸೇರಿಸಿ ಹೆಬೆಯ ಶಾಖವಿತ್ತೆ ....
ಮೊಗ್ಗು ಅರಳಿದಾಗ ಈ ಬಿಸಿಯ ಸ್ಪರ್ಶಕ್ಕೆ ಘಮದ ಸುಖದಿ ಮತ್ತನಾಗು ಬಾ ಸ್ವರ್ಗದೊಳಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ