ಶುಕ್ರವಾರ, ಆಗಸ್ಟ್ 30, 2013

ಮೈದುಂಬು

ಅಮೃತ ಕುಂಭದ ಹಾಗೆ ಗಳಿಗೆಗೊಂದು ಜೀವ ನದಿ ಹುಟ್ಟಿಸಿ ಆಯಸ್ಸು ಹೆಚ್ಚಿಸಬೇಡ ಈ ಕೊರಗಿನ ಮೈಯನ್ನ 
ಸೇರಿಸಿಕೊಂಡರೆ ಸಾಕು ನಾಲೆ ಬದಿ ತೊರೆಗೆ ... ಎಂದೂ ಸೇರುವೆ ಸಮುದ್ರವನ್ನ ........ 
ನಾನೇನು ವಜ್ರದ ತುಣುಕಲ್ಲ ಬಲ್ಲೆ .. ಬರೀ ಉಪ್ಪಿನ ಹರಳೇ ,ಅದರೂ ನಿನ್ನೊಳಗೆ ಕರಗುವ ಹುಚ್ಚು ಬಿಡಲಿಲ್ಲ 
ಒಣಗಿದ ನಾಲಿಗೆಯಡಿ ಖೇಚರಿ ಕನಸ ಕಾಣುವ ಉಪ್ಪಿನ ನಾಲಿಗೆ ಕೊರೆತದ ಮೆಲ್ಲನೆ ಕತ್ತರಿಸುವ ಚೂಪಲ್ಲ ನಾ 
ನಿನ್ನ ಬೆನ್ನಡಿಯ ಕುಂಡಲಿನಿ ಬಳಸಿ ಸರ್ಪನಿದ್ರೆ ಹತ್ತಿ ಅವರಿಸುವೆ ಹೃದಯ ಮುದ್ರೆಗೆ .ನಾಭಿ ತೆರೆದಾಗ ಅಲಿಂಗನ 
ಮೈ ಬಿಟ್ಟಾಗ ಪೊರೆ ..ತೊರೆದಾಗ ಸರ್ವಾಂಗ ಸ್ನಾನ ... ಹೋಗುವೆಯೆಲ್ಲಿಗೆ ಬಿಟ್ಟೂ ಬಿಡದೂರಿಗೆ ಬಿಗಿನಡೆಯಲ್ಲಿ ..
ವಿಷವೆಂದೆಡೆ ಇರದ ಅಮೂಲ್ಯ ಮಣಿ ಕಾoತಿಯೇ ಸೇರು ನನ್ನೊಳಗೆ ಬೆಳಕ ಬತ್ತಿ ಹತ್ತುರಿಯಲು ನೀ ಬಳಸಿದಲ್ಲಿ
ಬಂದದನ್ನೆಲ್ಲ ಎದೆ ಪಾತಾಳದಲಿ ಕರಗಿಸಿ ಕೊಳೆಯುವ ಮೊದಲೇ ಅರ್ಪಿಸಿಬಿಡು ನಾಳೆ ನೈವೇದ್ಯಕ್ಕೆ ಒಂದೇ ಎಡೆ ಹಾಕಿ ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ