ಮಂಗಳವಾರ, ಅಕ್ಟೋಬರ್ 1, 2013

ಅಂಧಕಾರ

ಅಂಧಕಾರ 

ಬಹಳಷ್ಟು ಕನಸುಗಳಿತ್ತು ಗೆಳತಿ ನಮ್ಮ ನಡುವಿನ ಮಾತುಗಳಲ್ಲಿ 
ಅದನ್ನು ಬರೀ ಮಾತಾಗಿ ನೀನು ಕೊಲ್ಲಬಾರದಿತ್ತು ಈ ಎದೆ ಮೇಲೆ,
ತುಂಬು ವಾತ್ಸಲ್ಯದಲಿ ಹೃದಯದ ಒಳಗೆ ಕರೆದು ಸಂಬ್ರಮಿಸಿದ್ದೆ 
ಅದನ್ನು ನಿರಾಶೆಯ ಕತ್ತಲಿಗೆ ಒದ್ದು ದೂಡಬಾರದಿತ್ತು ನೀನು.

ಸರಿದು ಹೋಗುವ ಮನಸ್ಸು ನಿನಗಿದ್ದರೂ ನನಗೊಮ್ಮೆ ಹೇಳಬಹುದಿತ್ತು
ಪಾಶಗಳ ಹಿಡಿತ ಮೋಹದ ಬಂಧನಗಳ ತೊರೆವ ಗಟ್ಟಿತನ ಬರುವರೆಗೂ
ನಿಲ್ಲಬಹುದಿತ್ತು,ತೊರೆಯದೇ ನನ್ನನೀ ವಿವಶತೆಯೊಳಗೆ.. ದುಃಖಸಾಗರದೊಳಗೆ
ನಿಲ್ಲಲಾರೆ ನಾನು.. ಇನ್ನೂ ಬಹಳ ದಿನ ನೀನು ಕೊಟ್ಟಿರುವ ಪೆಟ್ಟಿಗೆ..

ಗಾಯಗಳ ಮಾಯಿಸಲು ಔಷಧಿಗಳ ರಾಶಿ ಮುದ್ದಿನ ಮುಲಾಮುಗಳ ಪಟ್ಟಿ
ಹೊತ್ತು ನಿಂತ ಹೃದಯಗಳ ಕಣ್ಣ ಬೆಳಕ ಬೇಡವೆನಲಾರೆ,ಎಲ್ಲವನೂ ಮೀರಿ
ಘಾತಿಸುವ ನಿನ್ನ ಪರಿಯ ಹೊರಲಾರೆ,ಇಳಿಸಲಾರೆ,ಒಣಗಿಸಲಾರೆ ಕಂಬನಿ
ಏಕೆ ಹೀಗೆ ಗೆಳತಿ ?ಪೂರ್ಣಫಲಕೆ ಅರ್ಹಳಲ್ಲವೇ ನಾನು ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ